PLEASE LOGIN TO KANNADANET.COM FOR REGULAR NEWS-UPDATES


ಬಿಕ್ಕಳಿಕೆ


ಬೆಳಕಿಗಾಗಿ ಹಚ್ಚಿಟ್ಟ ದೊಂದಿ
ಬೆಂಕಿಯಾಗಿ ಸುಟ್ಟಿತ್ತು
ಬೆಳಕನರಸಿ ಹೊರಟ ಮೈ ಮನಸುಗಳ
ತುಂಬ  ಕಪ್ಪು ಇಲಾಣ ಹತ್ತಿತ್ತು

ಚರಿತ್ರೆಯ ಹಂಗಿಲ್ಲದೆ
ಬದುಕ ಹೊರಟ ನನಗೆ
ಬದುಕಿನೆಲ್ಲದರ ಬಗ್ಗೆ ಗಾಂಧಾರ ಪ್ರೀತಿ
ಅರ್ಥವಾಗುವುದೇ ಇಲ್ಲ
ಆಸೆಗಳ ತಲೆಹಿಡುಕತನದ ರೀತಿ

ಎಣ್ಣೆ ಇಲ್ಲದೆ ಉರಿದು ಹೋದ ಬತ್ತಿ
ಕಮಟು ವಾಸನೆ ನನ್ನ ಸುತ್ತ

ಮಾತು ಮುಗಿಯುವ ಮುನ್ನ
ಹೊಲಿದು ಹೋದ ತುಟಿಗಳು,
ನನ್ನೊಳಗೆ ಬಿಕ್ಕಳಿಸಿ ಅಳುತ್ತವೆ
ತಕರಾರು ಹೂಡುತ್ತಲೇ ಇವೆ
ನನ್ನ ನಿನ್ನೆಗಳು
ಉಳಿದ ಮಾತುಗಳು

- ಸಿರಾಜ್ ಬಿಸರಳ್ಳಿ

Advertisement

0 comments:

Post a Comment

 
Top