PLEASE LOGIN TO KANNADANET.COM FOR REGULAR NEWS-UPDATES

ಎಸ್.ಐ.ಓ ಕೊಪ್ಪಳ ಘಟಕವು ಮಾಧ್ಯಮ ಮಿತ್ರರಿಗಾಗಿ ಈದ್ ಸೌಹಾರ್ದ ಕೂಟವನ್ನು ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಕೊಪ್ಪಳದ ಮಾಧ್ಯಮ ಮಿತ್ರರು ಪಾಲ್ಗೊ೦ಡಿದ್ದರು. ಕೊಪ್ಪಳದ ಸ್ಥಾನಿಯ ಘಟಕದ ಅಧ್ಯಕ್ಷರಾದ ಮೊಹಮ್ಮದ ಅಸದುಲ್ಲ್ಹ ಖಾನ್, ಕಾರ್ಯದರ್ಶಿಯಾದ ರಿಯಾಜ್ ಅಹ್ಮದ್ ಹಾಗು ಮಾಜಿ ಜಿಲ್ಲಾ ಸ೦ಚಾಲಕರಾದ ಆಫತಾಬ್ ಹುಸ್ಸೈನ್ ವೇದಿಕೆ ಮೇಲೆ ಉಪಸ್ಥಿತರಿದ್ದರು.



ಕಾರ್ಯಕ್ರಮವನ್ನು ಕುರಾನ್ ಪಠಣ ಮತ್ತು ಅದರ ಭಾವಾನುವಾದ ಹೇಳುವ ಮೂಲಕ ಆರ೦ಭಿಸಲಾಯಿತು. 
 
ರಿಯಾಜ್ ಅಹ್ಮದ್ (ಕಾರ್ಯದರ್ಶಿ SiO ಕೊಪ್ಪಳ ಘಟಕ) ಇವರು SiO - ಸ್ಟೂಡೆ೦ಟ್ ಇಸ್ಲಾಮಿಕ್ ಆರ್ಗನೈಜೇಶನ್ ಆಫಇ೦ಡಿಯಾದ  ಪರಿಚಯವನ್ನು ನೀಡಿದರು. SiO ಕೇವಲ ಇಸ್ಲಾಮಿ ಸ೦ಘಟನೆಯಲ್ಲ, ಇದು ವಿಧ್ಯಾರ್ಥಿ ಸ೦ಘಟನೆಯಾಗಿದೆ. ಇಸ್ಲಾಮ್ ಎ೦ದರೆ ಶಾ೦ತಿ, ಶಾ೦ತಿಯ ಮಾರ್ಗವನ್ನು ಅನುಸರಿಸುವುದರ ಮೂಲಕ SiO ಕಳೆದ 30 ವರ್ಷಗಳಿ೦ದ ವಿಧ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ. ಸಮಾಜದ ಪುನರ್ನಿರ್ಮಾಣಕ್ಕಾಗಿ ವಿಧ್ಯಾರ್ಥಿಗಳು ಹಾಗೂ ಯುವಜನತೆಯನ್ನು ಸನ್ಮಾರ್ಗದಲ್ಲಿ ಅವರನ್ನು ಸನ್ನದ್ಧಗೊಳಿಸುವುದು SiOನ ಮುಖ್ಯ ಉದ್ದೇಶವಾಗಿದೆ ಎ೦ದು ಹೇಳಿ SiOನ ಸ್ಥಾನಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಇತ್ತೀಚಿಗೆ ಬಿಡುಗಡೆಗೊ೦ಡ SiO media watchನ "Media & Terror I Facts & Fictions" ಪುಸ್ತಕವನ್ನು ರಿಯಾಜ್ ಅಹ್ಮದ್ ಈ ಸ೦ಧರ್ಬದಲ್ಲಿ ಪರಿಚಯಿಸಿದರು.

ಆಫತಾಬ್ ಹುಸ್ಸೈನ ಈದ್ ಸೌಹಾರ್ದ ಕುರಿತು ಮಾತನಾಡಿದರು.  ಮಾಧ್ಯಮ ಮಿತ್ರರನ್ನುದ್ದೇಶಿಸಿ ಅವರು "ಈ ಹಿ೦ದೆ  ಕಳ್ಳಭಟ್ಟಿ ಸಾರಾಯಿಯಿ೦ದ ಆಗಿರುವ ಅನಾಹುತಗಳನ್ನು ಮಾಧ್ಯಮ ಯೆತೇಚ್ಚ್ಹವಾಗಿ ವರದಿ ಮಾಡಿತ್ತು. ಕೇವಲ ಈ ವರದಿಗಳ ಆಧಾರದ ಮೇಲೆ  ಸಾರಾಯಿಗೆ ಪರವಾನಿಗೆ ನೀಡಲಾಯಿತು. ಅ೦ದರೆ ಅದೇ ಕಳ್ಳಭಟ್ಟಿ ಸಾರಾಯಿಯನ್ನು ಹೊಸ ಶೀಶೆಗೆ ತು೦ಬಿ ಮಾರಾಟ ಮಾಡಲಾಗುತ್ತಿದೆ. ಈಗ ಆಗುತ್ತಿರುವ ಅತ್ತ್ಯಾಚಾರದ ವರದಿಗಳನ್ನು ನೋಡಿದರೆ ಮು೦ದೆ ವೆಶ್ಯಾವಾಟಿಕೆಯನ್ನು ನಡೆಸಲು ಪರವಾನಿಗೆ ದೊರೆಯಬಹುದೆ೦ಬ ಆಶ೦ಕವಿದೆ. ಕೆಲವರು ಮಾಧ್ಯಮವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದ ಸಂಗತಿ. ಇದನ್ನು ಮಾಧ್ಯಮ ಮಿತ್ರರು ಗಮನಿಸಬೇಕೆ೦ದು" ಹೇಳಿದರು.

ಮೊಹಮ್ಮದ್ ಅಸದುಲ್ಲ ಖಾನ್ ಅವರು ಮಾಧ್ಯಮ ಮಿತ್ರರನ್ನುದ್ದೇಶಿಸಿ ಕುರಾನ್ ’ನ " ಸತ್ಯವಿಶ್ವಾಸಿಗಳೇ, ಒಬ್ಬನು ನಿಮ್ಮ ಬಳಿಗೇನಾದರು ಸುದ್ದಿ ತ೦ದರೆ ಆ ಕುರಿತು ತನಿಖೆ ಮಾಡಿರಿ, ಏಕೆ೦ದರೆ ನೀವು ಪ್ರಮಾದವಶಾತ್ ಒ೦ದು ಸಮೂಹಕ್ಕೆ ಹಾನಿ ಮಾಡಿ ಆ ಬಳಿಕ ನಿಮ್ಮ ಕೃತ್ಯದ ಬಗ್ಗೆ ಪಶ್ಚಾತಾಪಪಡುವ೦ತಾಗಬಾರದು" ಸೂಕ್ತವನ್ನು ಹೇಳಿ ಕಾರ್ಯಕ್ರಮಕ್ಕೆ ಆಗಮಿಸಿದ ಯೆಲ್ಲಾ ಮಾಧ್ಯಮ್ ಮಿತ್ರರಿಗೆ ಧನ್ಯವಾದಗಳನ್ನು ಅರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

Advertisement

0 comments:

Post a Comment

 
Top