PLEASE LOGIN TO KANNADANET.COM FOR REGULAR NEWS-UPDATES


ವಿದ್ಯಾಧದಾತಿ ವಿನಯಂ :
ವಿನಯಾಧಾತಿ ಪಾತ್ರವಾಂ :
ಪಾತ್ರತ್ವಾತ್ ಧನಮಾನೋತಿ :
ಧನಾಧರ್ಮಂ ತತ್ ಸುಖಂ :
ಎಂಬ ಯುಕ್ತಿ ಅಕ್ಷರಂಶಯ ಶ್ರೀ ಅಭಿನವ ಶ್ರೀ ಗವಿಸಿದ್ಧೇಶ್ವ ಸ್ವಾಮಿಗಳಿಗೆ ಸಲ್ಲುತ್ತದೆ.  ಶ್ರೀ ಮ.ನಿ.ಪ್ರ.ಜ. ಶ್ರೀಗಳು ಮಹಾಪುರುಷರು, ಹೃದಯವಂತರು, ಶಕ್ತಿಸ್ವರೂಪರು ಹೊಸ, ಹೊಸ ವಿಚಾರ ಶೀಲರು ಭಕ್ತ ಸಮೂದಾಯವನ್ನು  ಕತ್ತಲಿಂದ  ಬೆಳೆಕೆನೆಡೆಗೆ  ನೆಡೆಸುವ ಹೃದಯ  ವೈಶಾಲರು . ಶ್ರೀ ಗವಿಸಿದ್ಧೇಶ  ಸ್ವಾಮಿಜಿಯವರು ೧೮ನೇ ಪಿಠಾಧಿಪತಿಗಳಾಗಿದ್ದು  ಶ್ರೀ ಮ.ನಿ.ಪ್ರ. ಜಗದ್ಗುರು  ಶ್ರೀ ಶಿವ ಶಾಂತಶಿವಯೋಗಿಗಳು ಮಮತೆಯ ಮಾನಸ ಪುತ್ರರು  ಶ್ರೀಗಳ ಕರ ಸಂಜಾತರು.
ಶ್ರೀ ಮ.ನಿ.ಪ್ರ. ಜ.ಶಿವ ಶಾಂತ ವೀರಶಿವಯೋಗಿಗಳು ತಮ್ಮ  ತಪೋಬಲ,ವಿದ್ವತ್,  ವಿನಯತೆ, ಶಾಂತತೆ, ತರ್ಕಬದ್ಧ ಜೀವನ, ಅನುಷ್ಠಾನ, ಅಂತ:ಕರುಣ ಅಮೃತ ಗುಣಗಳಿಂದ, ತನ್ನ ಭಕ್ತ ವೃಂದವನ್ನು ತಾವು ಮಮತೆ ವಾತ್ಸಲ್ಯದಿಂದ ನೋಡುತ್ತಿದ್ದರು. ಭಕ್ತಜನರ ಸಂಕಲ್ಪ  ಈಡೇರಿಸುವ ದೇವರಾಗಿದ್ದರು.  ಇವರು  ಶಾಂತಮೂರ್ತಿ ನೆಡೆದಾಡುವ ದೇವರೆಂದೇ  ಪ್ರಖ್ಯಾತರಾಗಿದ್ದರು. ಇಂಥವರ ಶಿಷ್ಯರೆ ಮಮತೆಯ ಕಂದನೇ ನಮ್ಮೆಲ್ಲರ ದೈವ ಶ್ರೀ ಅಭಿನವ ಗವಿಸಿದ್ಧೇಶ್ವರರು. 
ಶ್ರೀ ಅಭಿನವ ಶ್ರೀಗಳ  ಮೊದಲ ಹೆಸರು ’ಪರ್ವತ  ದೇವರು’ ಇವರು  ಗುಲಬರ್ಗಾ ಜಿಲ್ಲೆಯ ’ ಹಾಗರಗುಂಡಿ ’ ಎಂಬ ಪುಣ್ಯ ಭೂಮಿಯಲ್ಲಿ ೦೧.೦೬.೧೯೭೭ನೆಯ ಇಸ್ವಿ ಯಲ್ಲಿ  ವೀರ ಮಾಹೇಶ್ವರ ದಂಪತಿಗಳ ಪರಾಪುಣ್ಯ ಗರ್ಭದಲ್ಲಿ  ಜೇಷ್ಠರತ್ನರಾಗಿ ಜನಿಸಿದರು.  ಈ ಶ್ರೇಷ್ಠ ಜಂಗಮ ವರ್ಯ ಈ ಪುಣ್ಯಧರ್ಮಭೂಮಿಯ  ಮಡಿಲೊಡೆಯರಾಗಿ  ಈ ಭುವಿಗಿದುಸಿದರು.
ಇವರು  ಪ್ರಾಥಮಿಕ  ಶಿಕ್ಷಣವನ್ನು ಹಾಗರಗುಂಡಿಯಲ್ಲಿ  ಪ್ರೌಢಶಾಲಾ ಶಿಕ್ಷಣವನ್ನು   ಕೊಪ್ಪಳದಲ್ಲಿ ಕಲೆಯುತ್ತಾ ಶಾಲೆಯಲ್ಲಿ   ಪ್ರತಿಭಾವಂತ ವಿನಯತೆಯ ವಿದ್ಯಾರ್ಥಿಯಾಗಿ ತೆರ್ಗಡೆ ಹೊಂದಿ   ಬಿ.ಎ.[ಃ.ಂ.] ಪದವಿಯನ್ನು  ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ  ರ‍್ಯಾಂಕ ವಿಜೇತರಾಗಿ, ಎಂ.ಎ. .[ಒ.ಂ.]  ಇಂಗ್ಲೀಷ್ ಸ್ನಾತಕೋತ್ತರ   
ಪದವಿಯನ್ನು ಪೂನಾ ವಿಶ್ವವಿದ್ಯಾಲಯದಲ್ಲಿ  ಮೊದಲಿಗರಾಗಿ ತಮ್ಮ ಡಿಗ್ರಿ ಮುಗಿಸಿ  ಸಂಸ್ಕೃತ ಪದವಿಯ  ’ತಿರುಪತಿ’ ವಿಶ್ವವಿದ್ಯಾಲಯದಲ್ಲಿ ಕಲೆತು ತಮ್ಮ  ವಾಕ್ ಚತುರತೆ, ವಿದ್ವತ್, ತರ್ಕ ಬದ್ಧತೆ, ಚಿಂತನಾ ಶೀಲತೆ, ಸೃಜನ ಶೀಲತೆ, ಶೈಕ್ಷಣಿಕ ಚಿಂತನೆ  ಪ್ರಗತಿ ಪರಧೋರಣೆಯಿಂದ, ವಿಶಾಲ ಮನೋಭಾವದಿಂದ ಪ್ರಖ್ಯಾತರಾಗಿದ್ದಾರೆ. 
ಶ್ರೀ ಗವಿಶಿದ್ಧೇಶ್ವರಸ್ವಾಮಿಜಿಯವರು ತಾವು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ ವಿವೇಕಾನಂದರ  ಬಗ್ಗೆ   ನೆಡೆದ  ಭಾಷಣ [Sಠಿeeಛಿh] ಸ್ಪರ್ದೆಯಲ್ಲಿ ಭಾಗವಹಿಸಿ  ಮಾತನಾಡುವ  ಸಮಯದಲ್ಲಿ  ಪೇಠ್ ಭರ್‌ನೆತರ್‌ಖಾನಾ ಏ ಮಾನವ  ಸಂಸ್ಕೃತಿಹೈ, ಪೀಠಾಭರ್ ನೆರೆಬಾದ ಭೀ ಖಾನಾ ಏ ರಾಕ್ಷಸ್ ಸಂಸ್ಕೃತಿ ಹ್ವೆ   ಹೊಟ್ಟೆ ತುಂಬಾ  ಊಟ ಮಾಡುವುದು ಮಾನವನ ಸಹಜ ಸಂಸ್ಕೃತಿ, ಹೊಟ್ಟೆ ತುಂಬಿದ ಮೇಲೂ  ಊಟ ಮಾಡುವುದು ರಾಕ್ಷಸ ಸಂಸ್ಕೃತಿ ಆದರೆ  ಮತ್ತೊಬ್ಬರ ಹೊಟ್ಟೆ  ತುಂಬಿಸುವುದರ ಸಲುವಾಗಿ  ಸಾಯುವುದು ಭಾರತೀಯ ಸಂಸ್ಕೃತಿ ಎಂದು ಹೇಳಿದ  ಅಂದಿನ ಬಾಲಕನೇ  ಇಂದಿನ ದೇವ ಮಾನವ ಶ್ರೀ ಗವಿಶಿದ್ಧೇಶ್ವ ’ಬೆಳೆಯುವ ಸಿರಿ ಮೊಳೆಕೆಯಲ್ಲಿಯೇ ನೋಡು ಎಂಬ’ ಮಹತ್ಮರ ವಾಣಿಯಂತೆ  ಉನ್ನತ  ಆದರ್ಶಗಳನ್ನು  ಅರಿತ  ಮಹಾಪುರುಷ, ಬಾಲ್ಯದಲ್ಲಿಯೇ ನಯ, ವಿನಯದಿಂದ  ಭಕ್ತಿ ಭಾವದಿಂದ  ನೆಡೆಯುವ ಧಿಮಂತಿಕೆಯ  ವ್ಯಕ್ತಿತ್ವ.  ರಾಮಕೃಷ್ಣ ಪರಮಹಂಸರು ವಿವೇಕಾನಂದರನ್ನು  ಬೆಳೆಸಿದ ಹಾಗೆ ಶ್ರೀ  ಶಿವಶಾಂತ ಶಿವಯೋಗಿಗಳು ಶ್ರೀ ಅಭಿನವ ಗವಿಶಿದ್ಧೇಶ ಸ್ವಾಮಿಗಳನ್ನು ಬೆಳೆಸಿದರು. 
ಶ್ರೀ ಅಭಿನವ ಶ್ರೀಗಳು  ಗುರುಗಳಾಶಿರ್ವಾದದಿಂದ  ಶ್ರೀ ಮಠದ ೧೮ನೇ ಪೀಠಾಧಿಪತಿಯಾಗಿ  ’ಶಿಖರದ ಸೂರ್ಯರಾಗಿ’  ಈ ನಾಡ ಪುಣ್ಯಪುರುಷರಾಗಿ ; ಪರಂಜ್ಯೋತಿಯಾಗಿ  ಬೆಳಗುತ್ತಾ ’ ಬಾಳಲು ಆರೋಗ್ಯ, ಬದುಕಲು  ಅನ್ನ, ಬಾಳಿ ಬದುಕಲು ಶಿಕ್ಷಣ’ ಈ  ತ್ರಿವಿಧದಾಸೋಹಗಳನ್ನು  ಮಠದ ಸಂಸ್ಕೃತಿಯಂತೆ  ನೆಡೆಸುತ್ತಾ  ಇಷ್ಟಕ್ಕೆ  ಸಿಮಿತ ವಾಗದೆ  ಅತಿ ಚಿಕ್ಕ ವಯಸ್ಸಿನಲ್ಲಿಯೇ  ಪೀಠಾರೋಹಣವನ್ನೇರಿದ  ಸ್ವಾಮಿಜೀಯವರು ಕ್ರಾಂತಿ ಕಾರಿ  ಬೆಳವಣಿಗೆಯ ಹೆಜ್ಜೆ ಹಾಕುತ್ತಾ  ಐವತ್ತು ವರ್ಷಗಳಲ್ಲಿ  ಸಾಕಾರಗೊಳ್ಳಬಹುದಾದ ಕೆಲಸ  ಕಾರ್ಯಗಳನ್ನು ಕೇವಲ  ಐದೇ ವರುಷದಲ್ಲಿ   ಮಾಡಹತ್ತಿರುವರು. ಶ್ರೀ ಮಠ ಸಾವಿರಾರು ವರ್ಷದಲ್ಲಿ ಆಗದ ಬದಲಾವಣೆಯನ್ನು  ಮತ್ತು  ತನ್ನ ಬೌತಿಕ ಚಿತ್ರಣವನ್ನು  ಈ ಐದು ವರ್ಷದಲ್ಲಿ ಅಗಾಧ ಬದಲಾವಣೆ ಹೊಸ  ಹೊಸ ಕಟ್ಟಡ  ಹೊಂದಿ ಜೊತೆಗೆ  ಅಧ್ಯಾತ್ಮಿಕ ಶಿಕ್ಷಣ ,  ಪ್ರಾಕೃತಿಕ, ಬಡವರ ಉಸಿರಾಗಿ, ನೊಂದವರ ನಂದಾದೀಪವಾಗಿ, ಸಾಂಸ್ಕೃತಿಕ ಮೌಲ್ಯ ಗಳಿಂದ  ಶ್ರೀಮಂತವಾದ ಯೋಜನೆಗಳಿಂದ  ಶ್ರೀ ಮಠದ ಚಿತ್ರಣವನ್ನು  ಸಮೃದ್ದಗೊಳಿಸಿದ್ದಾರೆ,  ಸಮೃದ್ಧಗೊಳಿಸುತ್ತಿದ್ದಾರೆ. 

ಶ್ರೀಗಳು  ವಯಸ್ಸಿನಲ್ಲಿ  ಚಿಕ್ಕವರಾದರೂ ತಮ್ಮ ಮೌಲ್ಯಾಧರಿತ  ಗುಣಗಳಿಂದ  ದೊಡ್ಡವರಾಗಿದ್ದಾರೆ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ , ನ್ಯಾಯ, ನೀತಿ, ಧರ್ಮ ಶ್ರೇಷ್ಟತೆಯಿಂದ  ತನ್ನ ಭಕ್ತ  ವೃಂದವನ್ನು   ಉದ್ಧರಿಸುತ್ತಾ, ತಮ್ಮ  ಗುರುಗಳು  ಹಾಕಿಕೊಟ್ಟ   ಮಾರ್ಗದಲ್ಲಿಯೇ  ಮುನ್ನೆಡೆಯುವ  ಸತ್ ಸಂಕಲ್ಪ ಹೊಂದಿದ್ದಾರೆ.  ಅನ್ನ ದಾಸೋಹದ ಜೊತೆಗೆ  ಜ್ಞಾನದಾಸೋಹಕ್ಕೆ  ಬಹಳ ಒತ್ತು  ಕೊಟ್ಟಿದ್ದಾರೆ.  ಅಂದು ಶ್ರೀ ಮರಿಶಾಂತಶಿವ ಯೋಗಿಗಳು ಹಚ್ಚಿದ  ’ಜ್ಞಾನದಾಸೋಹದ  ದೀಪ’ ಇಂದಿಗೂ  ನಿರಂತರವಾಗಿ  ನೆಡೆಯುತ್ತಿದೆ.   ಆ ಜ್ಞಾನದೀಪ ಶ್ರೀ ಅಭಿನವಗವಿಶಿದ್ಧೇಶ್ವರರ ಕಾಲದಲ್ಲಿ ಉತ್ತುಂಗ ಮಟ್ಟ ತಲುಪಿದೆ. 
ಒಂದಡೆ  ಸಮಾಜಿಕ  ಕಳಕಳಿ  ಇನ್ನೊಂದಡೆ ಧಾರ್ಮಿಕ  ಕಳಕಳಿ ಜನ ಸಾಮಾನ್ಯರಿಗೂ   ತಲುಪಿಸಲು  ಹಳ್ಳಿ ಹಳ್ಳಿಗಳ ಸುತ್ತಾಟ ಅಧ್ಯಾತ್ಮದ  ಔತಣ ಕೂಟ  ಏರ್ಪಡಿಸಿ ಜನಸಾಮಾನ್ಯರಿಗೆ ಧರ್ಮದ  ಜ್ಞಾನ ದಾಸೋಹ ನೀಡುವ  ’ಸತ್ ಸಂಕಲ್ಪ’ ಮಾಡುತ್ತಾ  ನೆಡಿದಿದ್ದಾರೆ.  ಶ್ರೀಗಳು  ಇಂಥಾ  ಪುಣ್ಯ ಪುರುಷ ಮಹತ್ವನನ್ನು  ನಮಗೆ ದೊರಕಿಸಿ ಕೊಟ್ಟ  ಶ್ರೀ ಗವಿಶಿದ್ದೇಶನ ರೂಪದಲ್ಲೇ  ತಮ್ಮದೊಡ್ಡಿ ಶ್ರೀಗಳು ಅನರ್ಥರತ್ನವನ್ನು   ತಂದು  ಶ್ರೀ ಶಿವಶಾಂತವೀರ ಶಿವಯೋಗಿಗಳ  ಮಡಲಿಗೆ  ಹಾಕಿ ಕೊಪ್ಪಳ ನಾಡನ್ನು   ಶ್ರೀ ಮಂತಗೊಳಿಸಲು  ತಮ್ಮ  ಕರಸಂಜಾತರನ್ನು  ಬೆಳೆಸಿಕೊಟ್ಟ  ಮಹತ್ಮರು.
ಭವ್ಯವಾದ  ಗುಡ್ಡದಲ್ಲಿ   ಸುಂದರ ಪ್ರಕೃತಿಯ ಮಡಿಲಲ್ಲಿ   ಶ್ರೀಗಳ ಸೃಜನಶೀಲ  ಕಾರ್ಯಗಳು ನಿರಂತರವಾಗಿ ನೆಡೆಯಲಿ  ಪೀಠಾರೊಹಣದ  ಸ್ವಲ್ಪ ಸಮಯದಲ್ಲಿ  ಸಮಾಜಮುಖಿ  ಕಾರ್ಯಕ್ರಮ ಮಾಡುತ್ತಾ  ಅಭಿವೃದ್ಧಿ ಹರಿಕಾರರಾಗಿದ್ದಾರೆ ಶ್ರೀ ಅಭಿನವ ಶ್ರೀ ಮ.ನಿ.ಪ್ರ.ಜಗದ್ಗುರು ಶ್ರೀ ಗವಿಶಿದ್ಧೇಶ್ವರ  ಸ್ವಾಮಿಗಳು. 

ಲೇಖಕರು ಃ ಸರ್ವಮಂಗಳಾ ಜಿ.ಪಾಟೀಲ, ಹಲಗೇರಿ.

Advertisement

0 comments:

Post a Comment

 
Top